Jaggesh: ರಾಯರ ಪವಾಡದಿಂದ ತಮ್ಮ ಬದುಕಿದ; ಕೋಮಲ್ ಕೊರೋನಾ ಗೆದ್ದ ಸತ್ಯ ಬಿಚಿಟ್ಟ ಜಗ್ಗೇಶ್
ಎರಡು ವಾರದ ಹಿಂದೆ ಸೋಂಕಿನಿಂದ ಗಂಭೀರಗೊಂಡ ಕೋಮಲ್ ಅವರನ್ನು ನಟ ಜಗ್ಗೇಶ್ ಆಸ್ಪತ್ರೆಗೆ ಸೇರಿಸಿದ್ದಾರೆ.
news18-kannada Updated:April 27, 2021, 6:15 PM IST
ಜಗ್ಗೇಶ್-ಕೋಮಲ್
ಕೊರೋನಾ ಎರಡನೇ ಅಲೆಯ ಸೋಂಕು ಉಸಿರಾಟಕ್ಕೆ ಕುತ್ತು ತರುತ್ತಿದ್ದು, ಆಕ್ಸಿಜನ್ ಮಟ್ಟ ಕಡಿಮೆಯಾಗಿ ಜನರು ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ. ಕೋವಿಡ್ಗೆ ಅನೇಕ ಸೆಲೆಬ್ರಿಟಿಗಳು ತುತ್ತಾಗುತ್ತಿದ್ದಾರೆ. ನಟ ಜಗ್ಗೇಶ್ ತಮ್ಮ ಕೋಮಲ್ ಕೂಡ ಸೋಂಕಿಗೆ ತುತ್ತಾಗಿ, ಸಾವು ಬದುಕಿನ ಹೋರಾಟದಿಂದ ಗೆದ್ದಿದ್ದಾರೆ. ತಮ್ಮ ಹೇಗೆ ಕೋವಿಡ್ ಗೆದ್ದು ಬಂದ ಎಂಬ ಕಥೆಯನ್ನು ನಟ ಜಗ್ಗೇಶ್ ಟ್ವೀಟರ್ ಮೂಲಕ ಹಂಚಿಕೊಂಡಿದ್ದಾರೆ. ಆಕ್ಸಿಜನ್ ಮಟ್ಟ 80ಕ್ಕೆ ಇಳಿದ ಆತ ರಾಯರ ಆಶೀರ್ವಾದದಿಂದ ಈಗ ಗುಣಮುಖನಾಗಿದ್ದಾನೆ ಎಂದು ಸಂತಸವನ್ನು ಹಂಚಿಕೊಂಡಿದ್ದಾರೆ.
ಹಲವು ಹಿಟ್ ಸಿನಿಮಾ ನೀಡಿದ ಕೋಮಲ್ ಸಿನಿ ರಂಗದಿಂದ ದೂರಾಗಿ ಸ್ವತಃ ವ್ಯವಹಾರ ನಡೆಸುತ್ತಿದ್ದಾರೆ. ಅವರು ಇತ್ತೀಚಿಗೆ ಸೋಂಕಿಗೆ ತುತ್ತಾಗಿದ್ದಾರೆ. ಕೋಮಲ್ ಸೋಂಕಿಗೆ ತುತ್ತಾಗಿರುವ ವಿಚಾರವನ್ನು ಇದೀಗ ನಟ ಜಗ್ಗೇಶ್ ತಿಳಿಸಿದ್ದು, ತಮ್ಮ ಹೇಗೆ ಬದುಕುಳಿದ ಎಂಬ ಸತ್ಯ ಬಿಚ್ಚಿಟ್ಟಿದ್ದಾರೆ.
ಬೆಂಗಳೂರಿನ ಕಾರ್ಪೋರೇಷನ್ನನ್ನು ಸ್ವತಃ ವ್ಯವಹಾರ ಮಾಡಿಕೊಂಡಿದ್ದ ಕೋಮಲ್ ಬಾಕಿ ವಸೂಲಿಗೆ ಹೋದ ಸಂದರ್ಭದಲ್ಲಿ ಎಲ್ಲೋ ಸೋಂಕಿಗೆ ತುತ್ತಾಗಿದ್ದಾರೆ. ಸೋಂಕು ಉಲ್ಬಣಗೊಂಡು ಕೋಮಲ್ ಕೊಂಚ ಸೀರಿಯಸ್ ಎನ್ನುವ ಮಟ್ಟಿಗೆ ತಲುಇದ್ದಾರೆ. ಈ ವೇಳೆ ಅವರ ಆಕ್ಸಿಜನ್ ಮಟ್ಟ ಕೂಡ ಕ್ಷೀಣಿಸಿದೆ.
ಎರಡು ವಾರದ ಹಿಂದೆ ಸೋಂಕಿನಿಂದ ಗಂಭೀರಗೊಂಡ ಕೋಮಲ್ ಅವರನ್ನು ನಟ ಜಗ್ಗೇಶ್ ಆಸ್ಪತ್ರೆಗೆ ಸೇರಿಸಿದ್ದಾರೆ. ಈ ವೇಳೆ ಅವರಿಗೆ ಸೋಕು ಶ್ವಾಸಕೋಶಕ್ಕೆ ಸೇರಿ ಆಕ್ಸಿಜನ್ ಮಟ್ಟ ಶೇ. 80ಕ್ಕೆ ಇಳಿದಿದೆ. ಈ ವೇಳೆ ದಿಕ್ಕು ತೋಚದೇ ಅಣ್ಣನಾಗಿ ನಾನು ಪಟ್ಟ ಪಾಡು ಆ ರಾಯರಿಗೆ ಗೊತ್ತು. ಈ ಸಂದರ್ಭದಲ್ಲಿ ನನ್ನ ಜೊತೆಯಲ್ಲಿದ್ದವರು ಆ ರಾಯರು. ಇದೇ ಕಾರಣಕ್ಕೆ ನಾನು ತಮ್ಮನ ಉಳಿಸಿಕೊಳ್ಳಲು ಆತನ ಜೊತೆ ರಾಯರ ಅಕ್ಷತೆ, ಮೃತ್ತಿಕೆ, ರಾಯರ ಬೃಂದಾವನ ತೊಳೆಯುವ ಪವಿತ್ರ ಜಲವನ್ನು ಕಳಿಸಿಕೊಟ್ಟೆ. ಅದೇನು ಪವಾಡ ನಡೆಯಿತೊ ಗೊತ್ತಿಲ್ಲ. ಕೋಮಲ್ ಬದುಕಿ ಬಂದಿದ್ದಾನೆ. ಆತ ಈಗ ಅಪಾಯದಿಂದ ಪರಾಗಿದ್ದು, ಆತನ ಆಕ್ಸಿಜನ್ ಮಟ್ಟ 98ಕ್ಕೆ ಬಂದಿದೆ. ಇದು ನಿಜಕ್ಕೂ ರಾಯರ ಪವಾಡ ಎಂದಿದ್ದಾರೆ.
ನಟ ಜಗ್ಗೇಶ್ಗೆ ರಾಯರ ಮೇಲೆ ಅಪಾರ ನಂಬಿಕೆ ಇರುವುದು ಎಲ್ಲರಿಗೂ ತಿಳಿದ ವಿಚಾರ. ತಾವು ಕಾಯವಾಚ ಮನಸಾರೆ ರಾಯರನ್ನು ಆರಾಧಿಸುವುದರಿಂದ ಹಲವು ಕಷ್ಟದ ಸಂದರ್ಭದಲ್ಲಿ ನನಗೆ ಅವರು ದಾರಿ ತೋರಿದ್ದಾರೆ ಎಂಬುದನ್ನು ನಟ ಜಗ್ಗೇಶ್ ಹಲವು ಬಾರಿ ಹೇಳಿದ್ದಾರೆ. ಇತ್ತೀಚೆಗಷ್ಟೇ ನಟ ಪುನೀತ್ ರಾಜ್ಕುಮಾರ್ ಯುವರತ್ನ ಸಿನಿಮಾ ನಿರ್ದೇಶಕ ಸಂತೋಷ್ ಆನಂದ್ರಾಮ್ ಮತ್ತವರ ತಂಡ ಜೊತೆಗೆ ಕೂಡ ನಟ ಜಗ್ಗೇಶ್ ಮಂತ್ರಾಲಯಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದರು.
ಹಲವು ಹಿಟ್ ಸಿನಿಮಾ ನೀಡಿದ ಕೋಮಲ್ ಸಿನಿ ರಂಗದಿಂದ ದೂರಾಗಿ ಸ್ವತಃ ವ್ಯವಹಾರ ನಡೆಸುತ್ತಿದ್ದಾರೆ. ಅವರು ಇತ್ತೀಚಿಗೆ ಸೋಂಕಿಗೆ ತುತ್ತಾಗಿದ್ದಾರೆ. ಕೋಮಲ್ ಸೋಂಕಿಗೆ ತುತ್ತಾಗಿರುವ ವಿಚಾರವನ್ನು ಇದೀಗ ನಟ ಜಗ್ಗೇಶ್ ತಿಳಿಸಿದ್ದು, ತಮ್ಮ ಹೇಗೆ ಬದುಕುಳಿದ ಎಂಬ ಸತ್ಯ ಬಿಚ್ಚಿಟ್ಟಿದ್ದಾರೆ.
ನಾನು ಇಷ್ಟುದಿನ ಮುಚ್ಚಿಟ್ಟು ಪಡುತ್ತಿದ್ದ ಯಾತನೆ ರಾಯರಿಗೆ
ಮಾತ್ರ ಗೊತ್ತು!ಭಕ್ತನ ಗುರುಗಳ ನಡುವೆ ನಡೆದಿತ್ತು ಭಾವನಾತ್ಮಕ ಭಕ್ತಿಯ ಬೇಡಿಕೆ!ಅದು ಒಂದೆ ರಾಯರೆ ನಾನು ಕಾಯವಾಚಮನ ಸತ್ಯವಾಗಿ ನಡೆದುಕೊಂಡಿದ್ದರೆ, ಹೃದಯದಿಂದ ಒಳ್ಳೆಯತನ ಅನುಸರಿಸಿದ್ದರೆ, ಮನುಷ್ಯ ಪಕ್ಷಿ ಪ್ರಾಣಿಯ ಆತ್ಮದಲ್ಲಿ ಸಮಾನವಾಗಿ ದೇವರಿದ್ದಾನೆ ಎಂದು ನಂಬಿದ್ದರೆ,ಯಾರಿಗು pic.twitter.com/VHBStldDIM
— ನವರಸನಾಯಕ ಜಗ್ಗೇಶ್ (@Jaggesh2) April 27, 2021
ಬೆಂಗಳೂರಿನ ಕಾರ್ಪೋರೇಷನ್ನನ್ನು ಸ್ವತಃ ವ್ಯವಹಾರ ಮಾಡಿಕೊಂಡಿದ್ದ ಕೋಮಲ್ ಬಾಕಿ ವಸೂಲಿಗೆ ಹೋದ ಸಂದರ್ಭದಲ್ಲಿ ಎಲ್ಲೋ ಸೋಂಕಿಗೆ ತುತ್ತಾಗಿದ್ದಾರೆ. ಸೋಂಕು ಉಲ್ಬಣಗೊಂಡು ಕೋಮಲ್ ಕೊಂಚ ಸೀರಿಯಸ್ ಎನ್ನುವ ಮಟ್ಟಿಗೆ ತಲುಇದ್ದಾರೆ. ಈ ವೇಳೆ ಅವರ ಆಕ್ಸಿಜನ್ ಮಟ್ಟ ಕೂಡ ಕ್ಷೀಣಿಸಿದೆ.
ಕೋಮಲ್ ಆಸ್ಪತ್ರೆಗೆ 2ವಾರದ ಹಿಂದೆ ಸೇರಿಸುವಾಗ ಎಲ್ಲರು ಕಂಗಾಲಾದರು!ನಾನು 18ಅಧ್ಯಾಯ ಭಗವದ್ಗೀತೆ ಓದಿಮುಗಿಸಿ ಅವನೊಟ್ಟಿಗೆ ರಾಯರ ಅಕ್ಷತೆ,ಮೃತ್ತಿಕೆ,ರಾಯರ ಬೃಂದಾವನ ತೊಳೆಯುವ ಪವಿತ್ರ ಜಲ ಕಳಿಸಿಕೊಟ್ಟೆ!ಮಿಕ್ಕದ್ದು ರಾಯರಪವಾಡ,80%ಶ್ವಾಶಕೋಷಕ್ಕೆ ಹೊಕ್ಕಿ80ಕ್ಕೆ ಇಳಿದಿದ್ದ oxygenಇಂದು 98ಕ್ಕೆ ಬಂದಿದೆ!ಭವರೋಗವೈಧ್ಯ ಗುರುರಾಯರು
ಗುರುಭ್ಯೋನಮಃ pic.twitter.com/epnooRQyAb
— ನವರಸನಾಯಕ ಜಗ್ಗೇಶ್ (@Jaggesh2) April 27, 2021
ಎರಡು ವಾರದ ಹಿಂದೆ ಸೋಂಕಿನಿಂದ ಗಂಭೀರಗೊಂಡ ಕೋಮಲ್ ಅವರನ್ನು ನಟ ಜಗ್ಗೇಶ್ ಆಸ್ಪತ್ರೆಗೆ ಸೇರಿಸಿದ್ದಾರೆ. ಈ ವೇಳೆ ಅವರಿಗೆ ಸೋಕು ಶ್ವಾಸಕೋಶಕ್ಕೆ ಸೇರಿ ಆಕ್ಸಿಜನ್ ಮಟ್ಟ ಶೇ. 80ಕ್ಕೆ ಇಳಿದಿದೆ. ಈ ವೇಳೆ ದಿಕ್ಕು ತೋಚದೇ ಅಣ್ಣನಾಗಿ ನಾನು ಪಟ್ಟ ಪಾಡು ಆ ರಾಯರಿಗೆ ಗೊತ್ತು. ಈ ಸಂದರ್ಭದಲ್ಲಿ ನನ್ನ ಜೊತೆಯಲ್ಲಿದ್ದವರು ಆ ರಾಯರು. ಇದೇ ಕಾರಣಕ್ಕೆ ನಾನು ತಮ್ಮನ ಉಳಿಸಿಕೊಳ್ಳಲು ಆತನ ಜೊತೆ ರಾಯರ ಅಕ್ಷತೆ, ಮೃತ್ತಿಕೆ, ರಾಯರ ಬೃಂದಾವನ ತೊಳೆಯುವ ಪವಿತ್ರ ಜಲವನ್ನು ಕಳಿಸಿಕೊಟ್ಟೆ. ಅದೇನು ಪವಾಡ ನಡೆಯಿತೊ ಗೊತ್ತಿಲ್ಲ. ಕೋಮಲ್ ಬದುಕಿ ಬಂದಿದ್ದಾನೆ. ಆತ ಈಗ ಅಪಾಯದಿಂದ ಪರಾಗಿದ್ದು, ಆತನ ಆಕ್ಸಿಜನ್ ಮಟ್ಟ 98ಕ್ಕೆ ಬಂದಿದೆ. ಇದು ನಿಜಕ್ಕೂ ರಾಯರ ಪವಾಡ ಎಂದಿದ್ದಾರೆ.
ನಟ ಜಗ್ಗೇಶ್ಗೆ ರಾಯರ ಮೇಲೆ ಅಪಾರ ನಂಬಿಕೆ ಇರುವುದು ಎಲ್ಲರಿಗೂ ತಿಳಿದ ವಿಚಾರ. ತಾವು ಕಾಯವಾಚ ಮನಸಾರೆ ರಾಯರನ್ನು ಆರಾಧಿಸುವುದರಿಂದ ಹಲವು ಕಷ್ಟದ ಸಂದರ್ಭದಲ್ಲಿ ನನಗೆ ಅವರು ದಾರಿ ತೋರಿದ್ದಾರೆ ಎಂಬುದನ್ನು ನಟ ಜಗ್ಗೇಶ್ ಹಲವು ಬಾರಿ ಹೇಳಿದ್ದಾರೆ. ಇತ್ತೀಚೆಗಷ್ಟೇ ನಟ ಪುನೀತ್ ರಾಜ್ಕುಮಾರ್ ಯುವರತ್ನ ಸಿನಿಮಾ ನಿರ್ದೇಶಕ ಸಂತೋಷ್ ಆನಂದ್ರಾಮ್ ಮತ್ತವರ ತಂಡ ಜೊತೆಗೆ ಕೂಡ ನಟ ಜಗ್ಗೇಶ್ ಮಂತ್ರಾಲಯಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದರು.
Published by:
Seema R
First published:
April 27, 2021, 6:11 PM IST










