ಭಾಷೆಯನ್ನು ಆಯ್ಕೆಮಾಡಿ :

ಕನ್ನಡ (Kannada)

west-bengalASSEMBLY ELECTIONS 2021

292/292 SEATS (147 SEATS TO WIN)

Alliance TMCBJPLEFT+OTH
Wins
+
Leads
2147611
+/- 2015

292/292 SEATS

(147 SEATS TO WIN)

tamil-naduASSEMBLY ELECTIONS 2021

234/234 SEATS (118 SEATS TO WIN)

Alliance DMK+AIADMK+MNM+AMMK+OTH
Wins
+
Leads
15975000
+/- 2015

234/234 SEATS

(118 SEATS TO WIN)

keralaASSEMBLY ELECTIONS 2021

140/140 SEATS (71 SEATS TO WIN)

Alliance LDFUDFBJP+OTH
Wins
+
Leads
994100
+/- 2015

140/140 SEATS

(71 SEATS TO WIN)

assamASSEMBLY ELECTIONS 2021

126/126 SEATS (64 SEATS TO WIN)

Alliance BJP+INC+OTH
Wins
+
Leads
75501
+/- 2015

126/126 SEATS

(64 SEATS TO WIN)

puducherryASSEMBLY ELECTIONS 2021

30/30 SEATS (16 SEATS TO WIN)

Alliance BJP+INC+OTH
Wins
+
Leads
1695
+/- 2015

30/30 SEATS

(16 SEATS TO WIN)

ಮಹದೇಶ್ವರ ಬೆಟ್ಟಕ್ಕೆ ತಿರುಪತಿ ಮಾದರಿಯಲ್ಲಿ ಮೆಟ್ಟಿಲು ನಿರ್ಮಾಣ ಯೋಜನೆಗೆ ಚಾಲನೆ

ತಾಳಬೆಟ್ಟದಿಂದ ಮಹದೇಶ್ವರ ಬೆಟ್ಟದವರೆಗಿನ‌  ಬಸವನ ಹಾದಿ 9.4 ಕಿಲೋಮೀಟರ್ ದೂರವಿದೆ. ಲಕ್ಷಾಂತರ ಭಕ್ತಾದಿಗಳು ಮಹದೇಶ್ವರನ  ದೇವಸ್ಥಾನಕ್ಕೆ ಈ ಹಾದಿಯಲ್ಲೇ ನಡೆದು ಬರುವುದರಿಂದ ಈ ಮಾರ್ಗದ  ಪುನಶ್ಚೇತನ ‌ಕಾರ್ಯ‌ ಪ್ರಾರಂಭವಾಗಿದೆ

ಚಾಮರಾಜನಗರ (ಏ.15) ಮಹದೇಶ್ವರ ಬೆಟ್ಟಕ್ಕೆ ಭಕ್ತರು ಕಾಲ್ನಡಿಗೆ ಮೂಲಕ ತೆರಳುವ ಬಸವನ ಹಾದಿಯನ್ನು ಸುಗಮಗೊಳಿಸಲು ತಿರುಪತಿ ಮಾದರಿಯಲ್ಲಿ ಮೆಟ್ಟಿಲುಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. 27 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ ಕಳೆದ ನವೆಂಬರ್‌ 25 ರಂದು ಮುಖ್ಯ ಮಂತ್ರಿ ಯಡಿಯೂರಪ್ಪ ಶಂಕುಸ್ಥಾಪನೆ ನೆರವೇರಿಸಿದ್ದರು. ಇದೀಗ ಸಾಲೂರು ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ತಾಳಬೆಟ್ಟದ ಮುಖ್ಯ ದ್ವಾರದಲ್ಲಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಇಷ್ಟಾರ್ಥ ಸಿದ್ದಿಗಾಗಿ ಮಹದೇಶ್ವರನ ಭಕ್ತರು ಕಾಲ್ನಡಿಗೆಯಲ್ಲಿ ಬೆಟ್ಟಕ್ಕೆ ಬರುವುದಾಗಿ ಹರಕೆ ಹೊರುವುದು ಸಾಮಾನ್ಯವಾಗಿದೆ. ಇಲ್ಲಿನ ತಾಳಬೆಟ್ಟದಿಂದ ಮಹದೇಶ್ವರ ಬೆಟ್ಟಕ್ಕೆ  ಬಸವನಹಾದಿ ಹಾಗೂ ಸರ್ಪನ ಹಾದಿ ಎಂಬ ಎರಡು ದಾರಿಗಳಿದ್ದು  ಬಸವಹಾದಿ ದಟ್ಟಾರಣ್ಯದ  ಬೆಟ್ಟಗುಡ್ಡಗಳಿಂದ ಕೂಡಿದೆ. ಸರ್ಪನ ಹಾದಿ ರಸ್ತೆ ಮೂಲಕವೇ ಸಾಗುತ್ತದೆ. ಆದರೆ ಬಸವನಹಾದಿಯ ಮೆಟ್ಟಿಲುಗಳು ಶಿಥಿಲಗೊಂಡಿವೆ. ಹಾಗಾಗಿ ಭಕ್ತರು ಕಲ್ಲು ಮುಳ್ಳು ಗಳ ನಡುವೆ ಬೆಟ್ಟ ಹತ್ತಿ ಬರಬೇಕಿತ್ತು  


ತಾಳಬೆಟ್ಟದಿಂದ ಮಹದೇಶ್ವರ ಬೆಟ್ಟದವರೆಗಿನ‌  ಬಸವನ ಹಾದಿ 9.4 ಕಿಲೋಮೀಟರ್ ದೂರವಿದೆ. ಲಕ್ಷಾಂತರ ಭಕ್ತಾದಿಗಳು ಮಹದೇಶ್ವರನ  ದೇವಸ್ಥಾನಕ್ಕೆ ಈ ಹಾದಿಯಲ್ಲೇ ನಡೆದು ಬರುವುದರಿಂದ ಈ ಮಾರ್ಗದ  ಪುನಶ್ಚೇತನ ‌ಕಾರ್ಯ‌ ಪ್ರಾರಂಭವಾಗಿದೆ. ಸುಮಾರು 6900  ಮೆಟ್ಟಿಲುಗಳು ಹಾಗು 13100 ನೆಲಹಾಸುಗಳನ್ನು  ಈ ಯೋಜನೆ ಒಳಗೊಂಡಿವೆ. ಖಾಸಗಿ ಕಂಪನಿಯೊಂದು ಕಾಮಗಾರಿಯ ಟೆಂಡರ್ ಪಡೆದಿದ್ದು ಎರಡು ವರ್ಷದೊಳಗೆ ಮೆಟ್ಟಿಲು ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.


ದಶಕಗಳ ಹಿಂದೆಯೇ ಈ ಕೆಲಸ ಆಗಬೇಕಿತ್ತು. ಲೋಕೋಪಯೋಗಿ ಇಲಾಖೆಯ ಅಂದಿನ ಸೂಪರಿಂಟೆಂಡೆಂಟ್ ಇಂಜಿನಿಯರ್ ಆಗಿದ್ದ  ( ಪ್ರಸ್ತುತ ಚೀಫ್ ಇಂಜನಿಯರ್ ) ವೀರಭದ್ರಯ್ಯ  ತಮ್ಮ ತಂಡದೊಂದಿಗೆ 2020ರ ಜನವರಿಯಲ್ಲಿ ಬಸವನ ಹಾದಿಯ ಮೆಟ್ಟಿಲುಗಳನ್ನು  ಹತ್ತಿ,  ವಿಸ್ತ್ರತ ಯೋಜನಾ ವರದಿಯನ್ನು ತಯಾರಿಸಿ‌ ನೀಡಿದ್ದರು. ಈ ವರದಿಯನ್ನು 2020 ರ ಮಾರ್ಚ್ ‌19 ರಂದು ನಡೆದ ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಸಭೆಗೆ ಮಂಡಿಸಿ ಆಡಳಿತಾತ್ಮಕ ಅನುಮೋದನೆ ಪಡೆಯಲಾಗಿತ್ತು, ಲೋಕೋಪಯೋಗಿ ಇಲಾಖೆ ಟೆಂಡರ್ ಪ್ರಕ್ರಿಯೆ  ಪೂರ್ಣಗೊಳಿಸಿದ ನಂತರ ಶಂಕುಸ್ಥಾಪನೆ  ಮಾಡಿಸಿ ಇದೀಗ ಎಲ್ಲ ಅಡತಡೆಗಳನ್ನು ನಿವಾರಿಸಿಕೊಂಡು ಕಾಮಗಾರಿ ಆರಂಭಿಸಲಾಗಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದ್ದಾರೆ


ಮೆಟ್ಟಿಲುಗಳನ್ನು ಹತ್ತಿ ದಣಿದು ಬರುವ ಭಕ್ತರ ವಿಶ್ರಾಂತಿ ಗಾಗಿ ರಂಗಸ್ವಾಮಿ ಒಡ್ಡು, ಆನೆತಲೆದಿಂಬ ಸೇರಿದಂತೆ ಮೂರು ಕಡೆ ವಿಶ್ರಾಂತಿ ಕೊಠಡಿ, ಶೌಚಾಲಯ ನಿರ್ಮಿಸಲು ಸಹ ಯೋಜಿಸಲಾಗಿದೆ. ಮೆಟ್ಟಿಲುಗಳ ನಿರ್ಮಾಣಕ್ಕೆ ಬಳಸುವ ಒಂದು ಕಲ್ಲಿಗೆ ಸರಿಸುಮಾರು ಹತ್ತು ಸಾವಿರ ರೂಪಾಯಿ ವೆಚ್ಚ ತಗುಲುವ ಅಂದಾಜಿದೆ. ಈ ಕಾರ್ಯಕ್ಕೆ ದೇಣಿಗೆ ನೀಡುವವರು ಪ್ರಾಧಿಕಾರದ ವೆಬ್ ಸೈಟ್ www.mmhillstemple.comಗೆ ಲಾಗಿನ್ ಆಗಿ ನೇರವಾಗಿ donation ಪಾವತಿಸಬಹುದು ಅಥವಾ ದೇವಾಲಯಕ್ಕೆ ಬಂದು ಮಾಹಿತಿ‌ ಕೇಂದ್ರದಲ್ಲಿ ಪಾವತಿಸಿ‌‌ ರಸೀದಿ‌ ಪಡೆಯಬಹುದು ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದ್ದಾರೆ

 (ವರದಿ: ಎಸ್.ಎಂ.ನಂದೀಶ್)

Published by: Seema R
First published: April 15, 2021, 6:03 PM IST